ಅಟಲ್ ಬಿಹಾರಿ ವಾಜಪೇಯಿ
ಭಾರತದ ಮಾಜಿ ಪ್ರಧಾನಮಂತ್ರಿ / From Wikipedia, the free encyclopedia
ಅಟಲ್ ಬಿಹಾರಿ ವಾಜಪೇಯಿ( 25 ಡಿಸೆಂಬರ್ 1924 - 16 ಆಗಸ್ಟ್ 2018)ಯವರು ಭಾರತದ ಮಾಜಿ ಪ್ರಧಾನಮಂತ್ರಿ, ರಾಜಕಾರಣಿ, ಶ್ರೇಷ್ಠ ಸಂಸದೀಯ ಪಟು, ವಾಗ್ಮಿ, ಕವಿ, ನೇತಾರ ಹಾಗೂ ಜನನಾಯಕ. ಮೂರು ಬಾರಿ ಭಾರತದ ಪ್ರಧಾನಮಂತ್ರಿಯಾಗಿ ಇದಕ್ಕೂ ಮುಂಚೆ ವಿದೇಶಾಂಗ ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ತಮ್ಮ ಸಭ್ಯತೆ, ಹಾಸ್ಯಪ್ರಜ್ಞೆ, ಉದಾರ ವ್ಯಕ್ತಿತ್ವ ಮತ್ತು ನಡವಳಿಕೆಗಳಿಂದ ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕೂಟದ ಅಧ್ಯಕ್ಷರಾಗಿದ್ದರು.
ಅಟಲ್ ಬಿಹಾರಿ ವಾಜಪೇಯಿ ಭಾರತ ರತ್ನ, ಪದ್ಮ ವಿಭೂಷಣ | |
---|---|
ಭಾರತದ 10 ನೇ ಪ್ರಧಾನಿ | |
ಅಧಿಕಾರ ಅವಧಿ 19 March 1998 – 22 May 2004 | |
ರಾಷ್ಟ್ರಪತಿ | ಕೆ ಆರ್ ನಾರಾಯಣನ್ ಎ.ಪಿ.ಜೆ.ಅಬ್ದುಲ್ ಕಲಾಂ |
ಪ್ರತಿನಿಧಿ | ಎಲ್. ಕೆ. ಅಡ್ವಾಣಿ |
ಪೂರ್ವಾಧಿಕಾರಿ | I. K. ಗುಜ್ರಾಲ್ |
ಉತ್ತರಾಧಿಕಾರಿ | ಮನಮೋಹನ್ ಸಿಂಗ್ |
ಅಧಿಕಾರ ಅವಧಿ 16 May 1996 – 1 June 1996 | |
ರಾಷ್ಟ್ರಪತಿ | ಶಂಕರ್ ದಯಾಳ್ ಶರ್ಮಾ |
ಉಪ ರಾಷ್ಟ್ರಪತಿ | ಕೆ. ಆರ್. ನಾರಾಯಣನ್ |
ಪೂರ್ವಾಧಿಕಾರಿ | ಪಿ.ವಿ. ನರಸಿಂಹ ರಾವ್ |
ಉತ್ತರಾಧಿಕಾರಿ | H. D. ದೇವೆಗೌಡ |
ವಿದೇಶಾಂಗ ಸಚಿವ | |
ಅಧಿಕಾರ ಅವಧಿ 26 March 1977 – 28 July 1979 | |
ಪ್ರಧಾನ ಮಂತ್ರಿ | ಮೊರಾರ್ಜಿ ದೇಸಾಯಿ |
ಪೂರ್ವಾಧಿಕಾರಿ | ಯಶ್ವಂತ್ರಾವ್ ಚವಾಣ್ |
ಉತ್ತರಾಧಿಕಾರಿ | ಶ್ಯಾಮ್ ನಂದನ್ ಪ್ರಸಾದ್ ಮಿಶ್ರಾ |
ವೈಯಕ್ತಿಕ ಮಾಹಿತಿ | |
ಜನನ | (೧೯೨೪-೧೨-೨೫)೨೫ ಡಿಸೆಂಬರ್ ೧೯೨೪ ಗ್ವಾಲಿಯರ್, ಗ್ವಾಲಿಯರ್ ರಾಜ್ಯ, ಬ್ರಿಟಿಷ್ ಭಾರತ(ಈಗ ಮಧ್ಯಪ್ರದೇಶ, ಭಾರತದಲ್ಲಿ) |
ಮರಣ | 16 August 2018(2018-08-16) (aged 93) ನವದೆಹಲಿ, ಭಾರತ |
ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ (1980–16 ಆಗಸ್ಟ್ 2018) |
ಇತರೆ ರಾಜಕೀಯ ಸಂಲಗ್ನತೆಗಳು |
ಜನತಾ ಪಕ್ಷ (1977—1980) ಭಾರತೀಯ ಜನಸಂಘ (before 1977) |
ಅಭ್ಯಸಿಸಿದ ವಿದ್ಯಾಪೀಠ | DAV ಕಾಲೇಜ್, ಕಾನ್ಪುರ್ (ಆಗ ಆಗ್ರಾ ವಿಶ್ವವಿದ್ಯಾನಿಲಯದೊಂದಿಗೆ ಸಂಯೋಜಿತವಾಗಿದೆ) |
ಉದ್ಯೋಗ | ಬರಹಗಾರ, ರಾಜಕಾರಣಿ, ಕವಿ |
ಸಹಿ | |
ಮಿಲಿಟರಿ ಸೇವೆ | |
ಪ್ರಶಸ್ತಿಗಳು | ಭಾರತ ರತ್ನ (2015) ಪದ್ಮ ವಿಭೂಷಣ (1992) |
ಅವರು ಮೂರು ಬಾರಿ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು, ಮೊದಲ ಬಾರಿಗೆ ೧೯೯೬ ರಲ್ಲಿ ೧೩ ದಿನಗಳ ಅವಧಿಗೆ, ೧೯೯೮ ರಿಂದ ೧೯೯೯ ರವರೆಗೆ ಹನ್ನೊಂದು ತಿಂಗಳ ಅವಧಿ, ಮತ್ತು ನಂತರ ೧೯೯೯ ರಿಂದ ೨೦೦೪ ರವರೆಗಿನ ಪೂರ್ಣಾವಧಿಗೆ.ಲೋಕಸಭೆ, ಕೆಳಮನೆಗೆ ಹತ್ತು ಬಾರಿ ಮತ್ತು ಮೇಲ್ಮನೆಗೆ ರಾಜ್ಯಸಭೆಗೆ ಎರಡು ಬಾರಿ ಆಯ್ಕೆಯಾದ ಅವರು ನಾಲ್ಕು ದಶಕಗಳ ಕಾಲ ಭಾರತೀಯ ಸಂಸತ್ ಸದಸ್ಯರಾಗಿದ್ದರು. ೨೦೦೯ ರವರೆಗೆ ಉತ್ತರ ಪ್ರದೇಶದ ಲಖನೌದ ಸಂಸತ್ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಆರೋಗ್ಯದ ಕಾರಣದಿಂದಾಗಿ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತರಾದರು. ೧೯೬೮ ರಿಂದ ೧೯೭೨ ರವರೆಗೆ ನೇತೃತ್ವ ವಹಿಸಿದ್ದ ಹಿಂದಿನ ಭಾರತೀಯ ಜನ ಸಂಘದ ಸಂಸ್ಥಾಪಕ ಸದಸ್ಯರಲ್ಲಿ ವಾಜಪೇಯಿ ಒಬ್ಬರಾಗಿದ್ದರು. ಪ್ರಧಾನಿ ಮೊರಾರ್ಜಿ ದೇಸಾಯಿಯ ಕ್ಯಾಬಿನೆಟ್ನಲ್ಲಿ ವಿದೇಶಾಂಗ ಸಚಿವರಾಗಿದ್ದರು.[1] ಅವರೊಬ್ಬ ಕವಿ, ಪತ್ರಕರ್ತ, ವಾಗ್ಮಿ, ಚಿಂತಕ, ದಾರ್ಶನಿಕ, ರಾಜಕಾರಣಿಯಾಗಿದ್ದರು. [2]