ರಾಮ ಮಂದಿರ, ಅಯೋಧ್ಯೆ
ಭಾರತದ ಅಯೋಧ್ಯೆಯಲ್ಲಿರುವ ರಾಮನ ಮಂದಿರ / From Wikipedia, the free encyclopedia
ಅಯೋಧ್ಯೆಯ ರಾಮಮಂದಿರ ಒಂದು ಹಿಂದೂ ದೇವಾಲಯವಾಗಿದ್ದು, ಇದನ್ನು ಭಾರತದ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಶ್ರೀ ರಾಮ ಜನ್ಮಭೂಮಿಯ ಪವಿತ್ರ ಯಾತ್ರಾ ಸ್ಥಳದಲ್ಲಿದೆ.[1] ೦೬-೦೮-೨೦೧೮ ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ದೇವಾಲಯದ ಶಿಲಾನ್ಯಾಸವನ್ನು ನೆರವೇರಿಸಿದರು. ಭಾರತದ ಈ ಸ್ಥಳವು ರಾಮನ ಜನ್ಮಸ್ಥಳ, ರಾಮ ವಿಷ್ಣುವಿನ ಏಳನೇ ಅವತಾರ ಎಂದು ಪೂಜಿಸುತ್ತಾರೆ.
Quick Facts ರಾಮ ಮಂದಿರ, ಅಯೋಧ್ಯೆ, ಭೂಗೋಳ ...
ರಾಮ ಮಂದಿರ, ಅಯೋಧ್ಯೆ | |
---|---|
ಭೂಗೋಳ | |
ಕಕ್ಷೆಗಳು | 26.7956°N 82.1943°E / 26.7956; 82.1943 |
ಸ್ಥಳ | ರಾಮ ಜನ್ಮಭೂಮಿ, ಅಯೋಧ್ಯೆ, ಉತ್ತರ ಪ್ರದೇಶ, ಭಾರತ |
ವಾಸ್ತುಶಿಲ್ಪಿ | ಸೋಂಪುರ ಕುಟುಂಬ |
ಇತಿಹಾಸ ಮತ್ತು ಆಡಳಿತ | |
ಸೃಷ್ಟಿಕರ್ತ | ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ |
ದೇವಳದ ಆಡಳಿತ ಮಂಡಳಿ | ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ |
ಅಧೀಕೃತ ಜಾಲತಾಣ | ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ |
Close
೧೫೨೮ ರಲ್ಲಿ ಮೊಘಲರು ರಾಮಮಂದಿರವನ್ನು ಕೆಡವಿ ಬಾಬರಿ ಮಸೀದಿಯನ್ನು ನಿರ್ಮಿಸಿದರು. ರಾಮಜನ್ಮಭೂಮಿಯ ಸ್ಥಳದ ಬಗೆಗೆ ಅನೇಕ ವಿವಾದಗಳು ನಡೆದವು. ೧೯೯೨ ರಲ್ಲಿ ಕರಸೇವಕರ ಗುಂಪು ಮಸೀದಿಯನ್ನು ಕೆಡವಿತು.
ಈ ದೇವಾಲಯದ ನಿರ್ಮಾಣದ ಹೊಣೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ್ದು. ಗುಜರಾತ್ನ ಸೋಮಪುರ ಕುಟುಂಬ ಈ ದೇವಾಲಯವನ್ನು ವಿನ್ಯಾಸಗೊಳಿಸಿದೆ.
22 ಜನವರಿ 2024 ರಂದು, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮಕ್ಕಾಗಿ ಮುಖ್ಯ ಯಜಮಾನ ಆಗಿ ಸೇವೆ ಸಲ್ಲಿಸಿದರು ಮತ್ತು ರಾಮ್ ಲಲ್ಲಾ ಅವರ ಪ್ರಾಣ ಪ್ರತಿಷ್ಠೆ (ಪವಿತ್ರೀಕರಣ) ಮಾಡಿದರು.